ಕಾಯಿ

ಹುಟ್ಟಿನಿಂದ ಕಟ್ಟಕೊನೆಗೆ ಕಾಯಬೇಕು ಕಾಯಿ || ಪ ||

ಗಿಡವ ಹಾಕಿ ಫಲವ ಬೇಡಿ ಕಾಯಬೇಕು ಕಾಯಿ
ದುಡಿದ ಮೇಲೆ ಫಲವಕೇಳಿ ಬೇಡಿ ಬೇಡಿ ಸಾಯಿ || ೧ ||

ಕಾಯಿ ಮಾಗಿ ಹಣ್ಣದಾಗಿ ಬೀಳ್ವವರೆಗೆ ಕಾಯಿ
ಸೋಯದಂತೆ ಗಿಡದ ಹಣ್ಣು ಸೇರಬೇಕು ಬಾಯಿ || ೨ ||

ಗುಡ್ಡವನು ಹತ್ತಲಿಕ್ಕೆ ಕೆಳಗಿನಿಂದ ಕಾಯಿ |
ಮತ್ತೆ ಇಳಿದು ಕೆಳಗೆ ಬರಲು ಕಾಯಿ ಹಣ್ಣುಗಾಯಿ || ೩ ||

ಅಡಿಗೆ ಮಾಡಿ ಉಣ್ಣಲೆಂದು ಒಲೆಯ ಮೇಲೆ ಕಾಯಿ
ತುಮುಲ ತುಡಿತ ಒಳಗಿದ್ದರು ಆಶೆಗಿಲ್ಲ ಬಾಯಿ || ೪ ||

ಒಡನೆ ಜೋಡಿ ಹೆಣ್ಣು ಬರುವವರೆಗೆ ಎಲ್ಲ ತಾಯಿ
ಅಮರ ಭಾವ ತುಂಬಿದ್ದರು ಆಕಾಂಕ್ಷೆಯೆ ಸೈಯಿ || ೫ ||

ವೃಕ್ಷವಾಗಿ ಬೀಜ ಮೇಲೆ ಏಳಲಿಕ್ಕೆ ಕಾಯಿ
ನಕ್ಷತ್ರವು ಕೆಳಗೆ ಬೀಳೆ ಸುಮ್ಮನೇನು ನೋಯಿ || ೬ ||

ಭೂಮಿ ನೀರು ಗಾಳಿ ಬೆಂಕಿ ಕಾಯುತಿಹವು ಕಾಯಿ
ಕಾಯಲೆಂದು ನಿನ್ನ ಎಲ್ಲ ಕಾಯುತಿಹವು ಕಾಯಿ || ೭ ||

ಕಾಯ್ದು ಕಾಯಿ ಹಣ್ಣಾಗಲು ಕಾಯಬೇಕು ಕಾಯಿ
ಆಯ್ದು ಬುಟ್ಟಿ ಸೇರಲಿಕ್ಕೆ ಕಾಲಕಾಗಿ ಕಾಯಿ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ವಾನ ಮೀಮಾಂಸೆ
Next post ಕಿಡ್ನಿ ಕತೆ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys